ಅಪಾರ ಭಕ್ತಿ-ಶ್ರೀಕೃಷ್ಣನನ್ನೇ ವರಿಸಿದ ಯುವತಿ!
ಉತ್ತರಪ್ರದೇಶ, ಮಾ 14 : ಎಲ್ಎಲ್ಬಿ ಪದವಿ ಅಭ್ಯಸಿಸುತ್ತಿರುವ ಯುವತಿಯೊಬ್ಬಳು ಶ್ರೀ ಕೃಷ್ಣನ ಮೇಲಿನ ಭಕ್ತಿಯಿಂದ ಕೃಷ್ಣನನ್ನೇ ವಿವಾಹವಾದ ಪ್ರಸಂಗ ಉತ್ತರಪ್ರದೇಶದಲ್ಲಿ ನಡೆದಿದೆ.
ರಕ್ಷಾ ( 30) ಶ್ರೀ ಕೃಷ್ಣನನ್ನು ಮದುವೆಯಾದ ಯುವತಿ. ಕಾನೂನು ಪದವಿ ಓದುತ್ತಿರುವ ಈಕೆಗೆ ಶ್ರೀಕೃಷ್ಣನೆಂದರೆ ಅಚ್ಚುಮೆಚ್ಚು. ಕೃಷ್ಣ ದೇವರನ್ನು ಶ್ರದ್ದಾಭಕ್ತಿಯಿಂದ ಪೂಜಿಸುತ್ತಿರುವ ಆಕೆಗೆ ತನ್ನ ಭಕ್ತಿ ಸದಾಕಾಲ ಇರಬೇಕೆಂಬ ಉದ್ದೇಶದಿಂದ ಶ್ರೀಕೃಷ್ಣನನ್ನೇ ಮದುವೆಯಾಗಿದ್ದಾಳೆ. ಈ ಮದುವೆಗೆ ಉತ್ತರ ಪ್ರದೇಶದ ಔರ್ರೈಯಾ ಜಿಲ್ಲೆಯ ಜನರೂ ಆಗಮಿಸಿ ಹಾರೈಸಿದ್ದಾರೆ.
ಶ್ರೀಕೃಷ್ಣನನ್ನು ವರಿಸುವ ತನ್ನ ನಿರ್ಧಾರವನ್ನು ಆಕೆ ತಂದೆ ರಂಜಿತ್ ಸಿಂಗ್ ಸೋಲಂಕಿ ಬಳಿ ಹೇಳಿಕೊಂಡಿದ್ದಾಳೆ. ಈ ವೇಳೆ ಮಗಳ ನಿರ್ಧಾರವನ್ನು ತಂದೆಯೂ ಒಪ್ಪಿದ್ದು, ಅದ್ದೂರಿಯಾಗಿ ವಿವಾಹ ಏರ್ಪಡಿಸಿದ್ದಾರೆ. ಕೃಷ್ಣನ ಮೂರ್ತಿ ಹೊತ್ತು ಮೆರವಣಿಗೆಯಲ್ಲಿ ರಕ್ಷಾ ಪಾಲ್ಗೊಂಡಿದ್ದಾಳೆ. ಬಳಿಕ ಆಕೆಯ ಕುಟುಂಬಿಕರು ಮೂರ್ತಿಗೆ ಆರತಿ ಬೆಳಗಿದ್ದಾರೆ. ಆನಂತರ ಕೃಷ್ಣನ ಮೂರ್ತಿಯೊಂದಿಗೆ ವಧು ರಕ್ಷಾ ಸುಖಚೈನ್ಪುರ ಪ್ರದೇಶದಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿದ್ದಾಳೆ. ಅಲ್ಲಿಂದ ಮತ್ತೆ ಮೂರ್ತಿ ಹೊತ್ತು ತವರಿಗೆ ಆಗಮಿಸಿದ್ದಾಳೆ.
ಸದ್ಯ ಆಕೆಯ ಈ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೂ ಕಾರಣವಾಗಿದೆ. ಹವಲರು ಯುವತಿಗೆ ಆಶೀರ್ವದಿಸಿದ್ದಾರೆ.