ಯುವಕನನ್ನು ಸ್ಕೂಟಿ ಹಿಂದೆ ಕಟ್ಟಿ ಎಳೆದೊಯ್ದ ಪುಂಡರು
ಬರೇಲಿ: ಸ್ಕೂಟಿ ಮೇಲೆ ಕುಳಿತಿದ್ದ ಮೂವರು ಯುವಕ ರು ಮತ್ತೊರ್ವ ಯುವಕ ನನ್ನು ಸ್ಕೂಟಿಗೆ ಕಟ್ಟಿ ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಬಳಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬರೇಲಿ ಜಿಲ್ಲೆಯ ಬರದರಿ ಪ್ರದೇಶದ ಮೊಹಲ್ಲಾ ಸಂಜಯ್ ನಗರದ ಹೋಳಿ ಚೌಕದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. 50 ಸೆಕೆಂಡುಗಳ ಈ ವಿಡಿಯೋದಲ್ಲಿ, ಘಟನೆಯು 35 ಸೆಕೆಂಡುಗಳ ನಂತರ ಗೋಚರಿಸುತ್ತಿದೆ. ಸ್ಕೂಟಿಯಲ್ಲಿ ಕುಳಿತಿದ್ದ ಮೂವರು ಪುಂಡರು ಯುವಕನೊಬ್ಬನನ್ನು ಸ್ಕೂಟಿಯ ಹಿಂದೆ ಕಟ್ಟಿ ಎಳೆದೊಯ್ದಿದ್ದು, ಅಂಗಡಿಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ.
ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದ್ದು, ಘಟನೆ ಕುರಿತು ಅಧಿಕಾರಿಗಳು ಅಕ್ಕಪಕ್ಕದ ಜನರಿಂದ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೇ, ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರಿಂದಲೂ ದೂರು ಬಂದಿಲ್ಲ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ತಾಯಿ ಜೊತೆ ಅಫೇರ್, ಬಾಣಸಿಗನ ಹತ್ಯೆ ಮಾಡಿದ ಪುತ್ರ!
ಬೆಂಗಳೂರು (ಜು.29): ತಾಯಿ ಜೊತೆ ಅಫೇರ್ ಇರಿಸಿಕೊಂಡಿದ್ದ ಎನ್ನುವ ಕಾರಣಕ್ಕಾಗಿ ಪುತ್ರನೊಬ್ಬ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ನಗರದ ರಾಜಾಜಿನಗರ 6ನೇ ಬ್ಲಾಕ್ನಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. 44 ವರ್ಷದ ರವಿ ಭಂಡಾರಿ ಸಾವು ಕಂಡಿರುವ ವ್ಯಕ್ತಿ. ಶುಕ್ರವಾರ ರಾತ್ರಿ ರಾಹುಲ್ ಎನ್ನುವ ವ್ಯಕ್ತಿ ತನ್ನ ಮನೆಯಲ್ಲಿಯೇ ರವಿ ಭಂಡಾರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ತನ್ನ ತಾಯಿಯಾಗಿರುವ ಪದ್ಮಾವತಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಶಂಕೆ ವ್ಯಕ್ತಪಡಿಸಿ ಆರೋಪಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಆರೋಪಿ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.
ಈ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮೃತ ವ್ಯಕ್ತಿ ರವಿ ಭಂಡಾರಿ ರಾಜಾಜಿನಗರ ಪಿಜಿಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಇದೇ ಪಿಜಿಯಲ್ಲಿ ರಾಹುಲ್ನ ತಾಯಿ ಪದ್ಮಾವತಿ ಅಡುಗೆ ಸಹಾಯಕಿಯಾಗಿದ್ದರು. ಶುಕ್ರವಾರ ರಾತ್ರಿ ಪದ್ಮಾವತಿ ಅವರ ಮನೆಯಲ್ಲಿಯೇ ರವಿ ಭಂಡಾರಿಯ ಹತ್ಯೆಯಾಗಿದೆ.
ಪದ್ಮಾವತಿಯ ಮಗ ರಾಹುಲ್ ಚಾಕುವಿನಿಂದ ಇರಿದು ರವಿ ಭಂಡಾರಿ ಹತ್ಯೆ ಮಾಡಿದ್ದಾರೆ. ತಾಯಿ ಜೊತೆ ಅನ್ಯೋನ್ಯವಾಗಿ ಮಾತನಾಡ್ತಾನೆ, ಅನೈತಿಕ ಸಂಬಂಧ ಶಂಕಿಸಿದ್ದ ರಾಹುಲ್ಕೊಲೆ ಮಾಡಿ ಪರಾರಿಯಾಗಿದ್ದಾರೆ. ಶುಕ್ರವಾರ ಮೃತ ರವಿ ಭಂಡಾರಿಗೆ ಕರೆ ಮಾಡಿ ಮಾತಾಡಬೇಕೆಂದು ಆರೋಪಿ ರಾಹುಲ್ ಮನೆಗೆ ಕರೆಸಿಕೊಂಡಿದ್ದ. ಕೊಲೆ ನಡೆದ ಸಮಯದಲ್ಲಿ ಆರೋಪಿಯ ತಾಯಿ ಪದ್ಮಾವತಿ ಪಿಜಿಯಲ್ಲಿ ಇದ್ದರು. ಮಾಗಡಿರೋಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.
ಕೊಲೆ ಮಾಡುವ ಮುನ್ನ ರವಿ ಹಾಗೂ ರಾಹುಲ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿರುವ ಸಾಧ್ಯತೆ ಇದೆ. ಸಿಟ್ಟಿನ ಭರದಲ್ಲಿ ರಾಹುಲ್ ಚಾಕು ಇರುವ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಜಿಯಲ್ಲಿ ಕೆಲಸ ಮುಗಿಸಿ ಪದ್ಮಾವತಿ ಮನೆಗೆ ವಾಪಾಸ್ ಬಂದಾಗ, ಮನೆಯಲ್ಲಿ ರವಿ ಹೆಣವಾಗಿ ಪತ್ತೆಯಾಗಿದ್ದಾನೆ. ತಕ್ಷಣವೇ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಳು.