ಶುಕ್ರವಾರ, ಜೂನ್ 9, 2023
ಅಜ್ಜಿಯನ್ನು ಕೊಲೆ ಮಾಡಿ ಶವ ಸುಟ್ಟ ಪ್ರಕರಣ: ಮೊಮ್ಮಗನ ಬಂಧನ-ಸೈಕ್ಲೋನ್‌ ಎಫೆಕ್ಟ್‌; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ-ಬಾಬಾಬುಡನಗಿರಿಯಲ್ಲಿ ಶೌಚಾಲಯ ಸಮಸ್ಯೆ; ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ-ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು-ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ಆಸೀಸ್‌ ವೇಗದ ದಾಳಿಗೆ ಕಂಗಾಲಾದ ಭಾರತಕ್ಕೆ ಇನ್ನಿಂಗ್ಸ್ ಹಿನ್ನಡೆ ಭೀತಿ; ಅಜಿಂಕ್ಯ ರಹಾನೆ ಆಸರೆ!-ಭಯಾನಕ ಮರ್ಡರ್; ಸಂಗಾತಿಯ ಶರೀರವನ್ನು ಪೀಸ್ ಪೀಸ್ ಮಾಡಿ ಕುಕ್ಕರ್ ನಲ್ಲಿ ಬೇಯಿಸಿದ ಕ್ರೂರಿ ಪ್ರೇಮಿ..!-ಕಾಂಗ್ರೆಸ್ ಸರ್ಕಾರಕ್ಕೆ 18 ಸಲಹೆಗಳನ್ನ ಕೊಟ್ಟ ಶಿಕ್ಷಣ ತಜ್ಞ ಪ್ರೊ ಎಂಆರ್ ​ದೊರೆಸ್ವಾಮಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮೂಡಬಿದ್ರೆಯಲ್ಲಿ ಅಭಯಚಂದ್ರ ನಿವೃತ್ತಿ, ಮಿಥುನ್ ರೈಗೆ ಬೆಂಬಲ, ಮತ್ತೆ ಐವನ್ ಎಂಟ್ರಿ! ಕುತೂಹಲ ಕೆರಳಿಸಿದೆ ಮೂಡಬಿದ್ರಿ ಕ್ಷೇತ್ರ!!

Twitter
Facebook
LinkedIn
WhatsApp
ಮೂಡಬಿದ್ರೆಯಲ್ಲಿ ಅಭಯಚಂದ್ರ ನಿವೃತ್ತಿ, ಮಿಥುನ್ ರೈಗೆ ಬೆಂಬಲ, ಮತ್ತೆ ಐವನ್ ಎಂಟ್ರಿ! ಕುತೂಹಲ ಕೆರಳಿಸಿದೆ ಮೂಡಬಿದ್ರಿ ಕ್ಷೇತ್ರ!!

ಕಳೆದ ಬಾರಿಯೂ ಜಿದ್ದಾಜಿದ್ದಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದ ಮೂಡಬಿದ್ರೆ ಕ್ಷೇತ್ರ ಮತ್ತೆ ರಾಜ್ಯವ್ಯಾಪಿ ಗಮನಸೆಳೆಯುತ್ತಿದೆ.

ನಿನ್ನೆ ಮಾಜಿ ಶಾಸಕ ಅಭಯಚಂದ್ರ ಜೈನ್ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮಂಗಳೂರಿನ ಪ್ರಮುಖ ಖಾಸಗಿ ವಾಹಿನಿಯಲ್ಲಿ ಸಂಜೆ ಮಾತನಾಡಿದ ಅವರು ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರಿಗೆ ಮೂಡಬಿದ್ರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ತನ್ನ ಸಂಪೂರ್ಣ ಬೆಂಬಲ ಇರುವುದಾಗಿ ಘೋಷಿಸಿದ್ದಾರೆ.

ಈ ನಡುವೆ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಮೂಡಬಿದ್ರೆಗೆ ಎಂಟ್ರಿ ನೀಡಿದ್ದಾರೆ. ನಿನ್ನೆ ದಿವಸ ಪುತ್ತಿಗೆ ಮತ್ತು ಇತರ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ್ದ ಲ್ಲದೆ, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ನಾಲ್ಕು ವರ್ಷ ಹಿಂದೆ ನಡೆದ ಜಿದ್ದಾಜಿದ್ದಿ ಮತ್ತೊಮ್ಮೆ ಮರುಕಳಿಸುವ ಸೂಚನೆ ಲಭ್ಯವಾಗಿದೆ.

ಮೂಡಬಿದ್ರೆಯಲ್ಲಿ ಅಭಯಚಂದ್ರ ನಿವೃತ್ತಿ, ಮಿಥುನ್ ರೈಗೆ ಬೆಂಬಲ, ಮತ್ತೆ ಐವನ್ ಎಂಟ್ರಿ! ಕುತೂಹಲ ಕೆರಳಿಸಿದೆ ಮೂಡಬಿದ್ರಿ ಕ್ಷೇತ್ರ!!

ಅಭಯಚಂದ್ರ ಜೈನ್ ನಿವೃತ್ತಿ ಘೋಷಿಸಿದ ನಂತರ ಹಲವಾರು ನಾಯಕರುಗಳು ಮೂಡುಬಿದ್ರೆ ಮೇಲೆ ಕಣ್ಣಿಟ್ಟಿದ್ದಾರೆ. ಅವರುಗಳಲ್ಲಿ ಮುಖ್ಯವಾಗಿ ಮಿಥುನ್ ರೈ ಹಾಗೂ ಐವನ್ ಡಿಸೋಜಾ ಮುಂಚೂಣಿಯಲ್ಲಿದ್ದಾರೆ. ಈ ಜಿದ್ದಾಜಿದ್ದಿ ಕಳೆದ ಬಾರಿ ಬಹಳಷ್ಟು ಜೋರಾಗಿತ್ತು. ಈ ಬಾರಿ ಮತ್ತೊಮ್ಮೆ ಮರುಕಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಬಾರಿ ಐವನ್ ಡಿಸೋಜ ಮೂಡಬಿದ್ರೆಯಲ್ಲಿ ತನ್ನ ಕಚೇರಿಯನ್ನು ತೆರೆದಿದ್ದರು. ಆದರೆ ಅಂತಿಮ ಹಂತದಲ್ಲಿ ಮಿಥುನ್ ರೈ ಮತ್ತು ಐವನ್ ಡಿಸೋಜಾ ಇಬ್ಬರಿಗೂ ಟಿಕೆಟ್ ನೀಡದೆ ಅಭಯಚಂದ್ರ ಜೈನ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಈ ಬಾರಿಯೂ ಈ ಜಿದ್ದಾಜಿದ್ದಿ ಏರ್ಪಡುವುದು ಬಹುತೇಕ ಖಚಿತವಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಜೋರಾಗಿ ನಡೆಯುತ್ತಿದ್ದು, ಬಿಜೆಪಿಯನ್ನು ಎದುರು ಮಾಡುವುದಕ್ಕಿಂತ ಹೆಚ್ಚಾಗಿ ಒಳಗಿಂದಲೇ ಬಡಿದಾಡಿ ಕೊಳ್ಳುವುದು ಹೆಚ್ಚಾಗಿದೆ. ಈ ಎಲ್ಲ ಅಂಶಗಳನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಲಾಭ ಎತ್ತಲು ಸರ್ವಪ್ರಯತ್ನಗಳನ್ನೂ ಬಿಜೆಪಿ ಮಾಡುತ್ತಿದೆ ಎಂದು ತಿಳಿದುಬಂದಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು