- ಕರಾವಳಿ
- 10:30 ಫೂರ್ವಾಹ್ನ
- ಮಾರ್ಚ್ 29, 2023
ಮಂಗಳೂರು: ಕದ್ರಿ ಜೋಗಿ ಮಠದ ಮತ್ಸ್ಯೇಂದ್ರನಾಥ ಗುಡಿ ಆವರಣದಲ್ಲಿ ಕ್ರಿ.ಶ 1423 ಕಾಲದ ಶಾಸನ ಪತ್ತೆ

ಮಂಗಳೂರು: ವಿಜಯನಗರ (Vijaynagar) ಅರಸ ವಿಜಯ ಭೂಪತಿರಾಯರ ಕಾಲದ ಶಾಸನವೊಂದು ಕದ್ರಿ ಜೋಗಿ ಮಠದ ಮತ್ಸ್ಯೇಂದ್ರನಾಥ ಗುಡಿಯ ಆವರಣದಲ್ಲಿ ಪತ್ತೆಯಾಗಿದೆ. ಈ ಶಸನವನ್ನು ಪ್ಲೀಚ್ ಇಂಡಿಯಾ ಫೌಂಡೇಶನ್- ಹೈದರಾಬಾದ್ನ ಇತಿಹಾಸ ಮತ್ತು ಪರಾತತ್ವ ಸಂಶೋಧಕ ಸಂಶೋಧಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆಯವರು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗೆ ದೇವಾಲಯದ ಜೀರ್ಣೋದ್ಧಾರ ಸಂದರ್ಭದಲ್ಲಿ ಈ ಶಾಸನವನ್ನು ಸಿಕ್ಕಿದೆ. ಗ್ರಾನೈಟ್ ಕಲ್ಲಿನ ಮೇಲೆ ಕನ್ನಡ ಭಾಷೆಯಲ್ಲಿ “ಸ್ವಸ್ತಿಶ್ರೀ” ಎಂಬ ಮಂಗಳಕರ ಪದ ಮತ್ತು ಗಣೇಶನಿಗೆ ಅರ್ಪಿತವಾದ ಸ್ತೋತ್ರವನ್ನು ಕೆತ್ತಲಾಗಿದೆ ಎಂದು ಶ್ರುತೇಶ್ ಆಚಾರ್ಯರು ತಿಳಿಸಿದ್ದಾರೆ.
ಶಾಸನದ ಮೇಲ್ಭಾಗ ಮಾತ್ರ ದೊರೆತ್ತಿದ್ದು, ಕೆಳಭಾಗ ಮಣ್ಣಿನಲ್ಲಿ ಹುದುಗಿದೆ. ಮೇಲ್ಭಾಗದಲ್ಲಿ ದಕ್ಷಿಣ ಭಾರತೀಯ ಶಾಸನ ಸಂಪುಟ-7, ಶಾಸನ ಸಂಖ್ಯೆ:192ರ ಮೊದಲ 10 ಸಾಲುಗಳನ್ನು ಬರೆಯಲಾಗಿದೆ. ಶಾಸನ 32 ಸಾಲುಗಳನ್ನು ಹೊಂದಿದ್ದು, ಸಮಗ್ರ ಅಧ್ಯಯನ ನಡೆಸಿ ಹೆಚ್ಚಿನ ವಿವರಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಕದ್ರಿ ದೇವಸ್ಥಾನದ ಪ್ರಧಾನ ಗುಮಾಸ್ತ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಶಾಸನದ ಮೇಲ್ಭಾಗದಲ್ಲಿ, ಶಿವಲಿಂಗ, ಸೂರ್ಯ ಮತ್ತು ಚಂದ್ರ, ನಂದಿ ಮತ್ತು ನಂದಾದೀಪ (ದೀರ್ಘಕಾಲದ ವಚನ ದೀಪ) ಚಿತ್ರಗಳನ್ನು ಕಾಣಬಹುದು. ಈ ಶಾಸನವನ್ನು ಕ್ರಿ.ಶ. 1423 ಮಂಗಳೂರಿನ ದೊರೆ ನಾಗಣ್ಣ ಹೊರಡಿಸಿದ್ದಾರೆ. ದೂರ ವಿಜಯ ಭೂಪತಿರಾಯನ ಆಯುಷ್ಯಾಭಿವೃದ್ಧಿಗಾಗಿ ಶಕವರುಷ 1345ನೆಯ ಶೋಭಕೃತ ಸಂವತ್ಸರದ ಚೈತ್ರ ಶುದ್ಧ ಆದಿತ್ಯವಾರ (ಸಾ.ಶ. 21/02/1423) ದಂದು ಶ್ರೀ ತಿಮಿರೇಶ್ವರ ದೇವರಲ್ಲಿ ಶಾಲಂಕಾಯನ ಗೋತ್ರದ ರುಕ್ ಶಾಖೆಯ ನರಹರಿ ಭಟ್ಟರ ಪುತ್ರ ಕೃಷ್ಣ ಭಟ್ಟರು ಮತ್ತು ಆತ್ರೇಯ ಗೋತ್ರದ ಯರ್ಜು ಶಾಖೆಯ ಅನಂತ ಭಟ್ಟರ ಪುತ್ರ ಮಾಯಿ ಭಟ್ಟರಿಂದ ದುರ್ಗಾದೇವಿಯ ಜಪವ ಮಾಡಿಸುತ್ತಾನೆ.
ಈ ವೇಳೆ ಇಬ್ಬರು ಬ್ರಾಹ್ಮಣ ಕೃಷ್ಣ ಭಟ್ಟ ಮತ್ತು ಮಹಿ ಭಟ್ಟರಿಗೆ 120 ಮೂಡೆ ಭತ್ತ ಬೆಳೆಯುವ ಭೂಮಿಯನ್ನು ದಾನವಾಗಿ ನೀಡಿದನ್ನು ಕೆತ್ತಲಾಗಿದೆ. ಈ ದಾನದ ಸಮಯದಲ್ಲಿ ಮಂಗಳೂರಿನ ವಿಜಯನಗರ ಸಾಮ್ರಾಜ್ಯದ ಆಗಿನ ಪ್ರತಿನಿಧಿಯಾಗಿದ್ದ ಬೈಚೆ ದಂಡನಾಯಕ ಉಪಸ್ಥಿತನಿದ್ದನು. ಶಾಸನವು ಮಂಜುನಾಥ ಮತ್ತು ಚಕ್ರಪಾಣಿ ಗೋಪಿನಾಥ ದೇವಸ್ಥಾನಗಳ ಬಗ್ಗೆ ತಿಳಿಸುತ್ತದೆ.