ಮಂಗಳವಾರ, ಅಕ್ಟೋಬರ್ 3, 2023
ರೊಚಿಗೆದ್ದ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ;ನಿಮ್ಮ ತೆವಲಿಗೋಸ್ಕರ ಫಾಲೋವರ್ಸ್ ಬೇಕು ಅಂತ ನ್ಯೂಸ್ ಹಾಕಬೇಡಿ!-ಹ್ಯುಂಡೈನ ಎಲ್ಲ ಮಾದರಿಯ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ನೀಡುವುದಾಗಿ ಘೋಷಿಸಿದ ಹ್ಯುಂಡ್ಯೆ!-ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್-ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!-ನನ್ನ ಮೇಲೆ ಹೈಕಮಾಂಡ್ ಗೆ ಪ್ರೀತಿ ಜಾಸ್ತಿ; ಅದಕ್ಕೆ ನಾನೇನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ !-ಕೇರಳ : ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ ; ಕರ್ತವ್ಯದಿಂದ ಅಮಾನತು!-ಮಹಾರಾಷ್ಟ್ರ : ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು!-ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್-ಕಾಪು : ಆಲದ ಮರ ಉರುಳಿ ಬಿದ್ದು ಓರ್ವ ಸಾವು ; ಇಬ್ಬರಿಗೆ ಗಾಯ!-Gold Rate : ಇಳಿಕೆ ಕಂಡ ಚಿನ್ನದ ಬೆಲೆ ; 10 ಗ್ರಾಂ ಚಿನ್ನ - ಬೆಳ್ಳಿಯ ದರ ಇವತ್ತೆಷ್ಟಿದೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೈ-ಕಾಲು ಕಟ್ಟಿ ದರೋಡೆ: ಮನೆಗೆಲಸದವಳ ಅಪ್ಪ-ಅಣ್ಣ ಅರೆಸ್ಟ್‌

Twitter
Facebook
LinkedIn
WhatsApp
theft arrest

ಬೆಂಗಳೂರು: ಇದೇ ತಿಂಗಳು (ಜ.5)ನೇ ತಾರೀಕು ನಗರದ ಕುಮಾರಸ್ವಾಮಿ ಲೇಔಟ್​ನ 2ನೇ ಹಂತದ ಮನೆಯೊಂದಕ್ಕೆ ಎಂಟ್ರಿ ಕೊಟ್ಟ ಗ್ಯಾಂಗ್ ಮನೆಯಲ್ಲಿದ್ದ ವೃದ್ಧೆಯ ಕೈಕಾಲು ಕಟ್ಟಿ ಹಾಕಿ, ಮನೆಯಲ್ಲಿದ್ದ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಗಿತ್ತು. ಇನ್ನು ಈ ವಿಚಾರ ಇಡಿ ಏರಿಯಾದ ಜನರನ್ನೇ ಒಂದು ಕ್ಷಣ ದಂಗು ಬಡಿಸಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕುಮಾರಸ್ವಾಮಿ ಲೇಔಟ್ ಪೊಲೀಸರು ಒರಿಸ್ಸಾಕ್ಕೆ ತೆರಳಿ ಆರೋಪಿಗಳ ಬಂಧಿಸುವುದರ ಜೊತೆ ಕಳುವಾದ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 3.50 ಲಕ್ಷ ಮೌಲ್ಯದ 66 ಗ್ರಾಂ ತೂಕದ ಚಿನ್ನಾಭರಣ, .1.50 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವರೇ ನೋಡಿ ಕದೀಮರು. ಜ್ಞಾನಾರ್ಜುನ್ ನಾತ್, ಶ್ರೀಕಾಂತ್ ದಾಸ್, ಸುಬಾಷ್ ಬಿಸ್ವಾಲ್, ಬಿಶ್ನು ಮೊಹನ್ ಕಟುವ, ಬಿಶ್ನು ಚರಣ್ ಬೆಹ್ರಾ, ಸುದಾನ್ಶು ಬೆಹ್ರಾ. ಮೂಲತಃ ಒರಿಸ್ಸಾದವರಾದ ಇವರ ಗ್ಯಾಂಗ್ ಲೀಡರ್ ಬಿಶ್ನೋ ಚರಣ್ ಬೆಹರಾ. ಕಳ್ಳತನವನ್ನೇ ಕಾಯಕ ಮಾಡಿಕೊಂಡು ದೆಹಲಿ, ಮುಂಬೈನಲ್ಲಿ ಸದ್ದು ಮಾಡಿದ್ದ ಇವರು ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಕೈ ಹಾಕಿ ಪೊಲೀಸರಿಗೆ ತಗಲಾಕಿಕೊಂಡಿದ್ದಾರೆ. ಅಸಲಿಗೆ ಬೆಂಗಳೂರಿನ ಗಾಳಿ ಗಂಧ ಗೊತ್ತಿಲ್ಲದ ಇವರಿಗೆ ಒಂಟಿ ವೃದ್ಧೆ ಮನೆ ಬಗ್ಗೆ ಗೊತ್ತಾಗಿದ್ದಾರೂ ಹೇಗೆ ಅನ್ನೊ ವಿಚಾರಕ್ಕೆ ಉತ್ತರ, ಆ ವೃದ್ಧೆ ಮನೆಯಲ್ಲಿ ಕೆಲಸಕ್ಕಿದ್ದ ಆ ದಂಪತಿಗಳು.

ಅಸಲಿಗೆ ನಿಜಕ್ಕೂ ಈ ಕಳ್ಳತನಕ್ಕೂ ಆ ದಂಪತಿಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಪ್ರಕರಣದ ಪ್ರಮುಖ ಆರೋಪಿ, ಮನೆ ಕೆಲಸಕ್ಕಿದ್ದ ಮಹಿಳೆಯ ತಂದೆ ಬಿಶ್ಣು ಚರಣ್ ಬೆಹ್ರಾ. ಹೌದು, ಹೀಗೆ ಕಳೆದ ಐದಾರೂ ತಿಂಗಳ ಹಿಂದೆ ಒರಿಸ್ಸಾ ಮೂಲದ ದಂಪತಿ ಕುಮಾರಸ್ವಾಮಿ ಲೇಔಟ್ ನಿವಾಸಿಯಾದ 57 ವರ್ಷದ ವೃದ್ಧೆ ಶ್ರೀಲಕ್ಷ್ಮಿ ಮನೆಗೆ ಕೆಲಸಕ್ಕೆ ಸೇರಿದ್ದರು. ಗಂಡ ಸೆಕ್ಯೂರಿಟಿ ಗಾರ್ಡ್​ಯಾಗಿದ್ದರೇ, ಹೆಂಡತಿ ಶ್ರೀಲಕ್ಷ್ಮಿಯವರ ಮನೆಯಲ್ಲಿ ಮನೆಗೆಲಸ ಮಾಡುತಿದ್ದರು. ಇನ್ನು ಶ್ರೀಲಕ್ಷ್ಮಿಗೆ ಇಬ್ಬರು ಮಕ್ಕಳಿದ್ದು ಮಗಳು ವೈದ್ಯೆ, ಮಗ ಉದ್ಯಮಿಯಾಗಿದ್ದಾನೆ.

ಆದರೆ ಇತ್ತೀಚೆಗೆ ಒರಿಸ್ಸಾದಿಂದ ಮಗಳ ನೋಡಲು ಬಂದ ಬಿಶ್ಣೋ ಆಕೆ ಕೆಲಸ ಮಾಡುತಿದ್ದ ಮನೆಯ ಐಶ್ವರ್ಯ ಕಂಡಿದ್ದನು. ಬಳಿಕ ಆ ಮನೆ ಟಾರ್ಗೆಟ್ ಮಾಡಿದ್ದು, ಮಗಳು ಮತ್ತು ಅಳಿಯ ಸಲುವಾಗಿ ಸಂಚು ರೂಪಿಸಿಕೊಂಡು ಸುಮ್ಮನಿದ್ದ. ಹೀಗೆ ಸಮ್ಮನಿದ್ದವ ಒಂದಿವಸ ಸಂಚು ಕಾರ್ಯಗತಗೊಳಿಸಿದನು. ಮಗಳು ಮತ್ತು ಅಳಿಯ ರಾಮಮೂರ್ತಿ ನಗರದ ಮತ್ತೊಂದು ಮನೆಗೆ ಕೆಲಸಕ್ಕೆ ಸೇರುತಿದ್ದಂತೆ ಪಾಟಾಲಂ ಕರೆದುಕೊಂಡು ಕೊರಿಯರ್ ನೆಪದಲ್ಲಿ ವೃದ್ಧೆಯ ಮನೆ ಬಾಗಿಲು ತಟ್ಟಿದ.

ವೃದ್ಧೆ ಬಾಗಿಲು ತೆರೆಯುತಿದ್ದಂತೆ ಗ್ಯಾಂಗ್ ಒಳಗೆ ಎಂಟ್ರಿಕೊಟ್ಟಿದ್ದರು. ನಂತರ ವೃದ್ಧೆಯ ಕೈಕಾಲು ಕಟ್ಟಿ ಮನೆಯಲ್ಲಿದ್ದ ಚಿನ್ನಾಭರಣ ನಗದು ದೊಚಿ ಪರಾರಿಯಾಗಿದರು. ಇನ್ನು ಆರೋಪಿಗಳು ಬಳಸಿದ ಭಾಷೆ ಹಾಗೂ ಟೆಕ್ನಿಕಲ್ ಮಾಹಿತಿ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಒರಿಸ್ಸಾದಲ್ಲಿ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ.

ಅಸಲಿಗೆ ಈ ಕಳ್ಳತನದ ಕೃತ್ಯ ಕೆಲಸಕ್ಕಿದ್ದ ದಂಪತಿಗಳಿಗೆ ಗೊತ್ತಾಗದ ರೀತಿ ನಡೆದಿದ್ದು, ಅಪ್ಪನ ಕಳ್ಳತನ ಕೃತ್ಯಕ್ಕೆ ಮಗಳು ಮತ್ತು ಅಳಿಯನ ಮಾನ ಬೀದಿಗೆ ಬಂದಿದೆ. ಇನ್ನು ಬಂಧಿತ ಆರೋಪಿಗಳು ಈ ಹಿಂದೆ ದೆಹಲಿ, ಮುಂಬೈ ಸೇರಿದಂತೆ ಹಲವು ಕಡೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದು ಗೊತ್ತಾಗಿದೆ. ಅದೇನೆ ಇದ್ದರು, ಪಾಪಿಗೆ ಸಮುದ್ರಕ್ಕೆ ಹೊದರು ಮೊಣಕಾಲುದ್ದ ನೀರು ಅನ್ನೊ ಹಾಗೆ ದೆಹಲಿ, ಮುಂಬೈ ಬಿಟ್ಟು ಬೆಂಗಳೂರಿಗೆ ಎಂಟ್ರಿ ಕೊಟ್ಟ ಕದೀಮರು ಕೃತ್ಯ ಎಸಗಿದ 48 ಗಂಟೆಯಲ್ಲೇ ಲಾಕ್ ಆಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ