ಸೋಮವಾರ, ಅಕ್ಟೋಬರ್ 2, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉತ್ತರಾಖಂಡ ಭೂಕುಸಿತ: ಬಿರುಕು ಬಿಟ್ಟ ಶಿವಲಿಂಗ, ಇಡೀ ಆಶ್ರಮವೇ ಕುಸಿಯುವ ಭೀತಿ!

Twitter
Facebook
LinkedIn
WhatsApp
1138474 cracks

ಚಮೋಲಿ: ಈ ಹಿಂದೆ ಕಂಡುಕೇಳರಿಯದ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಉತ್ತರಾಖಂಡದಲ್ಲಿ ಈಗ ಬೀಕರ ಭೂ ಕುಸಿತ ಸಮಸ್ಯೆ ತಲೆದೋರಿದ್ದು, ಬೆಟ್ಟ-ಗುಡ್ಡಗಳಲ್ಲ.. ಇಡೀ ಊರಿಗೆ ಊರೇ ಕುಸಿಯುವ ಭೀತಿ ಎದುರಾಗಿದೆ.

ಉತ್ತರಾಖಂಡದ ಹಿಂದೂ ಮಠಗಳಲ್ಲಿ ಒಂದಾದ ಜೋಶಿಮಠದ ಪರಿಸ್ಥಿತಿಯು ಘೋರವಾಗಿದ್ದು, ಜ್ಯೋತಿರ್ಮಠದ ಶಂಕರಾಚಾರ್ಯ ಮಠವು ಕಳೆದ 15 ದಿನಗಳಿಂದ ಹಲವೆಡೆ ಬಿರುಕು ಬಿಟ್ಟಿದ್ದು, ಇಡೀ ಮಠ ಕುಸಿಯ ಭೀತಿ ಎದುರಾಗಿದೆ.  ಕಳೆದ 15 ದಿನಗಳಿಂದ ಈ ಬಿರುಕುಗಳು ಹೆಚ್ಚಾಗ ತೊಡಹಿದ್ದು, ಯಾವಾಗ ಬೇಕಾದರೂ ಮಠ ಕುಸಿಯುವ ಸಾಧ್ಯತೆ ಇದೆ ಎಂದು ಜ್ಯೋತಿರ್ಮಠದ ಆಡಳಿತ ಮಂಡಳಿ ತಿಳಿಸಿದೆ.

Joshimath ANI 1 410x246 1

ಏತನ್ಮಧ್ಯೆ, ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಮನೆಗಳಲ್ಲಿ ಬಿರುಕು ಕಾಣಿಸಿಕೊಂಡ ನಂತರ, ಒಟ್ಟು 66 ಕುಟುಂಬಗಳು ಜೋಶಿಮಠದಿಂದ ವಲಸೆ ಹೋಗಿವೆ. ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಸುರಕ್ಷಿತ ಪರಿಹಾರ ಶಿಬಿರಗಳಲ್ಲಿ ಇರಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ ಎಂದು ಆಡಳಿತ ಭಾನುವಾರ ತಿಳಿಸಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಅವರು ನಿನ್ನೆ ರಾತ್ರಿ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಯಾವುದಾದರೂ ಅವಶ್ಯಕತೆ ಇದ್ದಲ್ಲಿ ತಕ್ಷಣ ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದರು. ಉತ್ತರಾಖಂಡದ ಪವಿತ್ರ ಪಟ್ಟಣ ಜೋಶಿಮಠದ ನಿವಾಸಿಗಳು ಪಟ್ಟಣದ ಮನೆಗಳು ಮತ್ತು ರಸ್ತೆಗಳಲ್ಲಿ ಬಿರುಕುಗಳನ್ನು ಗಮನಿಸಿದ ನಂತರ ಆತಂಕಕ್ಕೊಳಗಾಗಿದ್ದಾರೆ ಮತ್ತು ಆಡಳಿತದಿಂದ ಸ್ಥಳಾಂತರಿಸಿ ಪುರಸಭೆಯ ರಾತ್ರಿ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ಜೋಶಿಮಠದಲ್ಲಿ ನಿರಂತರ ಭೂಮಿ ಕುಸಿತದ ಪರಿಣಾಮವಾಗಿ 561 ಮನೆಗಳಲ್ಲಿ ಬಿರುಕುಗಳು ಉಂಟಾಗಿವೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾತನಾಡಿರುವ ಮಠದ ಮುಖ್ಯಸ್ಥ ಸ್ವಾಮಿ ವಿಶ್ವಪ್ರಿಯಾನಂದ ಅವರು, ‘ದೈವನಾಡಿನಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಅಭಿವೃದ್ಧಿ’ಯೇ ದುರಂತಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅಭಿವೃದ್ಧಿಯು ಈಗ ಜಲವಿದ್ಯುತ್ ಯೋಜನೆಗಳಿಂದ ನಾಶಕ್ಕೆ ಕಾರಣವಾಗಿದೆ, ಮತ್ತು ಸುರಂಗಗಳು ನಮ್ಮ ಊರಿನ ಮೇಲೆ ಪರಿಣಾಮ ಬೀರಿವೆ. 15 ದಿನಗಳ ಹಿಂದೆ ಯಾವುದೇ ಬಿರುಕುಗಳು ಇರಲಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಮಠದಲ್ಲಿ ಬಿರುಕುಗಳು ನಿರಂತರವಾಗಿ ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ.

ಜೋಶಿಮಠ ಪಟ್ಟಣವನ್ನು ಜ್ಯೋತಿರ್ಮಠ ಎಂದೂ ಕರೆಯುತ್ತಾರೆ, ಇದು ಭಗವಾನ್ ಬದರಿನಾಥನ ಚಳಿಗಾಲದ ಆಸನವಾಗಿದೆ, ಅವರ ವಿಗ್ರಹವನ್ನು ಮುಖ್ಯ ಬದರಿನಾಥ ದೇವಾಲಯದಿಂದ ಜೋಶಿಮಠದ ವಾಸುದೇವ ದೇವಾಲಯಕ್ಕೆ ಪ್ರತಿ ಚಳಿಗಾಲದಲ್ಲಿ ತರಲಾಗುತ್ತದೆ. ಜೋಶಿಮಠದ ಪವಿತ್ರ ಪಟ್ಟಣವನ್ನು ಹಿಂದೂಗಳು ದೇಶದ ಪ್ರಮುಖ ಯಾತ್ರಾ ಕೇಂದ್ರವೆಂದು ಪೂಜಿಸುತ್ತಾರೆ.

ಶಿವಲಿಂಗದಲ್ಲೇ ಬಿರುಕು
ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಸಂಭವಿಸುತ್ತಿರುವ ಭೂಕುಸಿತ ಇದೀಗ ಭೀಕರ ಸ್ವರೂಪ ಪಡೆದುಕೊಂಡಿದ್ದು, ಜೋಶಿಮಠದ ಮಾ ಭಗವತಿ ದೇವಸ್ಥಾನದಲ್ಲಿ ಭೂಕುಸಿತ ಸಂಭವಿಸಿದ ನಂತರ ಇದೀಗ ಶಂಕರಾಚಾರ್ಯ ಮಾಧವ ಆಶ್ರಮದ ಸ್ಫಟಿಕದ ಶಿವಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಲಕ್ಷ್ಮೀ ನಾರಾಯಣ ದೇವಸ್ಥಾನದ ಸುತ್ತಲೂ ಸಂಕೀರ್ಣದ ಕಟ್ಟಡಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ. ಮಠದ ಪ್ರವೇಶ ದ್ವಾರ, ಲಕ್ಷ್ಮೀನಾರಾಯಣ ದೇವಸ್ಥಾನ ಹಾಗೂ ಸಭಾಂಗಣದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಜ್ಯೋತಿರ್ ಮಠದ ಪ್ರಭಾರಿ ಬ್ರಹ್ಮಚಾರಿ ಮುಕುಂದಾನಂದ ತಿಳಿಸಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ